|
|
|||||||||||||||||
![]() |
ಪ್ರೇಕ್ಷಣೀಯ ಸ್ಥಳಗಳು |
![]() |
|||||||||||||||
|
|||||||||||||||||
|
ಇದು ನೊಳಂಬರ ಕಾಲದಲ್ಲಿ ಕಟ್ಟಿಸಿರಬಹುದೆಂದು ಕಂಡು ಬಂದಿರುತ್ತದೆ. ಈ ದೇವಸ್ಥಾನದಿಂದ ಕಂಬ ಶಾಸನದಿಂದ ಕ್ರಿ.ಶ. 815ರಲ್ಲಿ ಸಿಂಹಪೋತನ ಮಗ ಪರಮೇಶ್ವರ ಪಲ್ಲವಾದಿ ರಾಜ ಹಾಗೂ ಅವನ ಮಗ ಪಲ್ಲವಮಲ್ಲ ಇವರು ರಾಷ್ಟ್ರಕೂಟರ ಸಾಮಂತರಾಗಿದ್ದರೆಂದು, ತಲಕಾಡಿನ ಗಂಗರು ಇವರಿಗೆ ಸೋತು ಸಾಮಂತರಾಗಿದ್ದರೆಂದು, ಪರಮೇಶ್ವರ ಪಲ್ಲವನು ನೊಳಂಬಾಳಿಗೆ ನೀರ್ಗುಂದ ನಾಡನ್ನು ಆಳುತ್ತಿದ್ದಾಗ ಅವನ ರಾಣಿ ಗಾವಗನಬ್ಬೆ, ನಾರಮಾರಬ್ಬೆಯರು ಶಿವಾಲಯಕ್ಕೆ ದತ್ತಿ ಬಿಟ್ಟಿದ್ದನ್ನು, ಪರಮೇಶ್ವರನ ಸೋದರಿ ಪೆರ್ಮಾಡಿಯ ರಾಣಿಯಾಗಿದ್ದನ್ನು, ಗಂಗನೊಳಂಬರ ವೈವಾಹಿಕ ಸಂಭಂಧವನ್ನು, ದಾನನಬ್ಬೆಯ ಮದರಿಕಲ್ಲಿನ ಗಾವಗನೇಶ್ವರಿ ದೇವಾಲಯವೊಂದನ್ನು ಕಟ್ಟಿಸಿ ಭೂದತ್ತಿ ನೀಡಿದಳೆಂದು ಈ ಕನ್ನಡ ಶಾಸನ ತಿಳಿಸುತ್ತದೆ. ಅಲ್ಲದೇ ನೊಳಂಬರ ಕಾಲದ ರಾಜಮಾತೆಯು ಇಲ್ಲಿರುವ ಶಿವಲಿಂಗವನ್ನು ಪ್ರತಿಷ್ಟಾಪಿಸಿದಳೆಂದು ತಿಳಿದು ಬಂದಿದೆ. ಈ ಗ್ರಾಮದ ಸುತ್ತಮುತ್ತಲ ಹೊಲಗಳಲ್ಲಿ ವೀರಗಲ್ಲುಗಳು, ಶಾಸನಗಳು ಪತ್ತೆಯಾಗಿದೆ. |
||||||||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||||||||