10 ನೇ ಶತಮಾನದಲ್ಲಿ ಹೊಳಲ್ಕೆರೆಯು ಪ್ರಸಿದ್ಧ ಜೈನ ಕ್ಷೇತ್ರವಾಗಿದ್ದರಿಂದ ಇಲ್ಲಿ ಅನೇಕ ಬಸದಿಗಳಿದ್ದವು. ಈಗ ಉಳಿದಿರುವ ಶಾಂತಿನಾಥೇಶ್ವರ ಬಸದಿ ಪುರಾತನವಾದದ್ದು. ಇಲ್ಲಿಯ ಒಂದು ಶಾಸನದಿಂದ ಕ್ರಿ.ಶ. 214ರಲ್ಲಿ ಚಿತ್ರದುರ್ಗ ‘ಬೆಮ್ಮತ್ತನೂರು’ ಪಟ್ಟಣವೆಂದು ಬಲ್ಲಾಳನ ಮಂತ್ರಿ ಸೋಮಣ್ಣ ದಂಣಾಯಕನು ಆಳುತ್ತಿದ್ದನೆಂದು ಶಾಂತಿನಾಥೇಶ್ವರ ದೇವರ ನಿತ್ಯಸೇವೆಗೆ ಈತನ ಅಧೀನ ಅಧಿಕಾರಿಗಳು ದತ್ತಿ ಬಿಟ್ಟಿದ್ದರೆಂದು ಬಲ್ಲಾಣನ ಗಜವೇಂಠೆಕಾರ, ಗಂಡಭೇರುಂಡ, ಹುಲಿರಾಯ, ಪಾಂಡ್ಯರಾಯ, ಪ್ರತಿಷ್ಟಾಪನಚಾರ್ಯ ಮುಂತಾದ ಬಿರುದುಗಳಿಂದ ಹೊಗಳಲಾಗಿದೆ. ಚಿತ್ರದುರ್ಗದ ಸಾಮಂತರ ಮುಖ್ಯ ಪಟ್ಟಣವಾಗಿತ್ತೆಂದು ಇದರಿಂದ ತಿಳಿದು ಬರುತ್ತದೆ. |