ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಗೆ 10 ಕಿ.ಮೀ. ದೂರದಲ್ಲಿರುವ ಈ ಗ್ರಾಮವು ಶ್ರೀ ರಾಘವೇಂದ್ರ ಗುರೂಜಿಯವರ 1943ರಲ್ಲಿ ಸ್ಥಾಪಿಸಿದ ಸೇವಾಶ್ರಮದಿಂದ ನಮ್ಮ ಜಿಲ್ಲೆಯಷ್ಟೇ ಅಲ್ಲದೇ ನಾಡಿನಾದ್ಯಂತ ಪ್ರಖ್ಯಾತಿಗೊಂಡಿದೆ.
ಶ್ರೀ ರಾಘವೇಂದ್ರ ಗುರೂಜಿಯವರು ಕೇರಳದಿಂದ ಒಂದು 1943ರಲ್ಲಿ ಇಲ್ಲಿ ಆಶ್ರಮ ಸ್ಥಾಪಿಸಿದ್ದಾರೆ. ಇಂದಿಗೂ ಈ ಸೇವಾಶ್ರಮ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿದೆ. ಸ್ವತಃ ಸಾಹಿತಿಯಾಗಿದ್ದ ‘ಗುರೂಜಿ’ಯವರು ‘ತಿರುಕ’ ಎಂಬ ಕಾವ್ಯನಾಮದೊಂದಿಗೆ ಯೋಗ ಮತ್ತು ಆರ್ಯುವೇದಕ್ಕೆ ಸಂಭಂಧಿಸಿದಂತೆ ಹಾಗೂ ಸಾಹಿತ್ಯದ ಇತರೆ ಪ್ರಾಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವರು ದೇಹತ್ಯಾಗ ಮಾಡಿ ಕೆಲವು ವರ್ಷಗಳಾದರೂ ಇಲ್ಲಿಯ ಆಶ್ರಮದಲ್ಲಿ ಇಂದಿಗೂ ಸೇವೆ ನಿರಂತರವಾಗಿದೆ. ಇಲ್ಲಿ ರಂಗನಾಥಸ್ವಾಮಿ ದೇವಾಲಯವಿದ್ದು, ಆಗಾಗ ಇಲ್ಲಿ ಉತ್ಸವಗಳನ್ನು ನಡೆಸುತ್ತಾರೆ. ಶಿವರಾತ್ರಿಯಲ್ಲಿ ಬನಶಂಕರಿದೇವಿಯ ತೇರು ನಡೆಯುತ್ತದೆ. ಈ ತೇರನ್ನು ಶ್ರೀಗಂಧದಿಂದ ಮಾಡಿದ್ದಾರೆ.
(ಆಧಾರ: “ನಿರಂತರ”– ಬಿ.ರಾಜಶೇಖರಪ್ಪ) |