|
|
|||||||||||
![]() |
ಪ್ರಾತಃಸ್ಮರಣೀಯರು |
![]() |
|||||||||
|
|||||||||||
|
|
|||||||||||
ದೊರೆ ಇನ್ನೂ ಚಿಕ್ಕವನು ಎಂಬ ಕಾರಣಕ್ಕೆ ರಾಯದಯರ್ಗದವರು ಹರಪ್ಪನಹಳ್ಳಿಯವರ ನೆರವು ಪಡೆದು ದಾಳಿ ಮಾಡಿದರಾದರೂ ಯಶಸ್ಸು ಸಿಗಲಿಲ್ಲ. ದಕ್ಷಿಣದ ಕಡೆಗೆ ಮರಾಠರ ಮಾಧವರಾಯನು ಮೆದಕೇರಿನಾಯಕನಿಗೆ ಸಹಾಯ ಕೋರಲು, ಹೈದರನಿಗೆ ಸೇರಿದ ಕೆಲವು ಕೋಟೆಗಳನ್ನು ಗೆದ್ದುಕೊಟ್ಟನು. ಇದರಿಂದ ಹೈದರನಿಗೆ ಮೆದಕೇರಿನಾಯಕನ ಮೇಲೆ ದ್ವೇಷವುಂಟಾಗಿ, ಹೇಗಾದರೂ ಇವನನ್ನು ಹಣಿಯಬೇಕೆಂದು ಹೈದರ್ ಭಾರಿ ಸೈನ್ಯದೊಂದಿಗೆ ದುರ್ಗಕ್ಕೆ ಮುತ್ತಿಗೆ ಹಾಕಿದನು. ಆಗ ಹೈದರನು ದುರ್ಗದ ಸುತ್ತಮುತ್ತಲಿನ ಪಾಳೆಯಗಾರರೆಲ್ಲರ ಸಹಾಯ ಕೋರಿದನು. ಅಷ್ಟೇ ಅಲ್ಲದೇ ನಾಯಕನ ಸೈನ್ಯದಲ್ಲಿದ್ದ ಕೆಲವು ಮುಸಲ್ಮಾನ ಸರದಾರರು ಮತ್ತು ಕೆಲವು ಹಿಂದು ಅಧಿಕಾರಿಗಳು ಹೈದರನಿಗೆ ಶಾಮೀಲಾಗಿದ್ದರಿಂದ ಕ್ರಿ.ಶ. 1779ರಲ್ಲಿ ದುರ್ಗ ಹೈದರನಿಗೆ ವಶವಾಯಿತು.
ಚಿಕ್ಕಮೆದಕೇರಿನಾಯಕ ಮತ್ತು ದೊಡ್ಡಮೆದಕೇರಿನಾಯಕರನ್ನು ಬೇರೆಬೇರೆಯಾಗಿ ಬಂಧಿಸಿ ಶ್ರೀರಂಗಪಟ್ಟಣಕ್ಕೆ ಸಾಗಿಸಿದರು. ಬಂಧನದಲ್ಲಿದ್ದ ತಮ್ಮ ಪರಶುರಾಮನಾಯಕ ಹಾಗೂ ಮಗ ಕುಮಾರ ಭರಮಪ್ಪನಾಯಕರು ಕಬ್ಬಾಳದುರ್ಗದ ಸೆರೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸಿಕ್ಕಿಬಿದ್ದರು. ಕಡೆಗೆ ಹೈದರನ ಆದೇಶದಂತೆ ಬೈರಾಪಟ್ಟಣ ಎಂಬ ಊರಿನ ಬಳಿ ಆಲದ ಮರವೊಂದಕ್ಕೆ ಅವರನ್ನು ನೇಣು ಹಾಕಿ ಕೊಲ್ಲಲಾಯಿತು. ಇತ್ತ ಬಂಧನದಲ್ಲಿದ್ದ ದೊರೆಗೆ ವಿಷಪ್ರಾಷನವಾಗಿ ಅವನೂ ಕೂಡ ಮರಣ ಹೊಂದಿದನು. |
|||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||