A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಪ್ರಾತಃಸ್ಮರಣೀಯರು

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ

ತ.ರಾ.ಸು.
ಎಸ್.ನಿಜಲಿಂಗಪ್ಪ
ಹುಲ್ಲೂರು ಶ್ರೀ.ಜೋಯಿಸರು
ಪೈಲ್ವಾನ್ ನಂಜಪ್ಪ
ಬೆಳಗೆರೆ ಚಂದ್ರಶೇಖರಶಾಸ್ತ್ರಿ
ಕಾಶಿ ಅಪ್ಪಣ್ಣಶೆಟ್ಟರು
ಬಿಚ್ಚುಗತ್ತಿ ಭರಮಣ್ಣನಾಯಕ
ಮೆದಕೇರಿನಾಯಕ
ಒನಕೆ ಓಬವ್ವ
ಟಿ.ಎಸ್.ವೆಂಕಣ್ಣಯ್ಯ
ಬೆಳಗೆರೆ ಕೃಷ್ಣಶಾಸ್ತ್ರಿ
ತಿರುಕ (ಮಲ್ಲಾಡಿಹಳ್ಳಿ)
ಜಾನಪದ ಸಿರಿ 'ಸಿರಿಯಜ್ಜಿ'
ರಂಗಕರ್ಮಿ ಸಿ.ಜಿ.ಕೆ.
ಶ್ರೀಮಲ್ಲಿಕಾರ್ಜುನಸ್ವಾಮಿಗಳು

ಬಿಚ್ಚುಗತ್ತಿ ಭರಮಣ್ಣನಾಯಕ

        ದಳವಾಯಿ ಮುದ್ದಣ್ಣ ಮತ್ತು ಅವನ ಸಂಗಡಿಗರ ವಿರುದ್ಧವಾಗಿ ದಳವಾಯಿ ಭರಮಪ್ಪನ ನೇತೃತ್ವದಲ್ಲಿ ಒಂದು ಗುಂಪು ರೂಪುಗೊಂಡಿತು. ಅವರ ಉಪಾಯದಿಂದ ಮುದ್ದಣ್ಣ ಮತ್ತು ಅವನ ಸಂಗಡಿಗರನ್ನು ಸೆರೆ ಹಿಡಿದು ಶಿರಚ್ಛೇದನ ಮಾಡಿದರು. ದಳವಾಯಿ ಭರಮಪ್ಪ ಮತ್ತಿತರರ ಪ್ರಯತ್ನದಿಂದ, ಬಿಳಿಚೋಡಿನಲ್ಲಿದ್ದ ದುರ್ಗದ ಅರಸು ಮನೆತನಕ್ಕೆ ಸೇರಿದ ಭರಮಣ್ಣನಾಯಕನನ್ನು ಅಲ್ಲಿಂದ ಕರೆತಂದು ಕ್ರಿ.ಶ. 1689ರಲ್ಲಿ ಪಟ್ಟ ಕಟ್ಟಲಾಯಿತು. ಬಿಚ್ಚುಗತ್ತಿ ಭರಮಣ್ಣನಾಯಕ ಎಂದು ಇತಿಹಾಸದಲ್ಲೇ ಅತ್ಯಂತ ಉಲ್ಲೇಖನೀಯ ಅರಸನೆನಿಸಿದ್ದಾನೆ.

        ಇವನ ಆಳ್ವಿಕೆಯಲ್ಲಿ ದುರ್ಗದ ಸಂಸ್ಥಾನಕ್ಕೆ ಒಂದು ಬಗೆಯ ರಾಜಕೀಯ ಸ್ಥಿರತೆ ಮತ್ತು ಘನತೆ ಬಂದಿತೆಂದರೆ ತಪ್ಪಾಗಲಾರದು. ಇವನು ದೊರೆಯಾಗುವ ಮೊದಲಿದ್ದ ಆಂತರಿಕ ಅಶಾಂತಿ ಇವನು ಆಡಳಿತವನ್ನು ಕೈಗೆ ತೆಗೆದುಕೊಳ್ಳುತ್ತಲೇ ಅವೆಲ್ಲ ಅಡಗಿಹೋದವು. ರಾಯದುರ್ಗ, ಹರಪನಹಳ್ಳಿ, ತರೀಕೆರೆ, ಗುಡೇಕೋಟೆ ಮೊದಲಾದ ಸುತ್ತಮುತ್ತಲ ಅರಸರು ಘರ್ಷಣೆಯ ಪ್ರಸಂಗಗಳನ್ನು ತರುತ್ತಿದ್ದರೂ ಅವರನ್ನು ಭರಮಣ್ಣನಾಯಕ ಯಶಸ್ವಿಯಾಗಿ ಎದುರಿಸಿ ಜಯಶೀಲನಾದನು. ಇದಷ್ಟೇ ಅಲ್ಲದೇ ಮರಾಠರು, ಸೀರ್ಯದ ಮೊಗಲ್ ಸುಬೇದಾರರು, ಇವರ ಪ್ರಾಬಲ್ಯ ಅರಿತು ಸಹಕರಿಸುತ್ತಾ ಬಂದರು. ಕಾಲನಂತರ ಕ್ರಿ.ಶ. 1721ರಲ್ಲಿ ಚಿತ್ರದುರ್ಗದ ಹುಲಿಯೊಂದು ಸ್ವರ್ಗಸ್ಥವಾಯಿತು.

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.