ಬೆಳಗೆರೆ ಕೃಷ್ಣಶಾಸ್ತ್ರಿ
ಹೆಸರು |
ಬೆಳಗೆರೆ ಕೃಷ್ಣಶಾಸ್ತ್ರಿ |

|
ಜನ್ಮ ದಿನಾಂಕ |
22-05-1918 |
ತಂದೆ |
ಚಂದ್ರಶೇಖರಶಾಸ್ತ್ರಿಗಳು (ಆಶುಕವಿ, ಸಂಸ್ಕೃತ ವಿಧ್ವಾಂಸರು) |
ತಾಯಿ |
ಅನ್ನಪೂರ್ಣಮ್ಮ |
ಪತ್ನಿ |
ಪದ್ಮಾವತಿ (ಹಿರಿಯೂರು ಮೋಕ್ಷಗುಂಡಂ ಹನುಂತರಾಯರ ಮಗಳು) |
ಅಣ್ಣ |
ಸೀತಾರಾಮಶಾಸ್ತ್ರಿ (ಗಣಿತ ಪ್ರಾಧ್ಯಾಪಕರು, ನಾಟಕಕಾರರು, ಇವರ ಕಾವ್ಯನಾಮ “ಕ್ಷೀರಸಾಗರ”) |
ತಂಗಿ |
ಪಾರ್ವತಮ್ಮ (ಕತೆಗಾರ್ತಿ, ರವಿ ಬೆಳಗೆರೆಯವರ ತಾಯಿ) |
ವಿದ್ಯಾಭ್ಯಾಸ |
ಬೆಂಗಳೂರಿನ ಮಲ್ಲೇಶ್ವರಂ ಹೈಸ್ಕೂಲ್, ಮೈಸೂರು (ಬಿ.ಇಡಿ) |
ವೃತ್ತಿ |
ಎಚ್.ಎ.ಎಲ್.ನಲ್ಲಿ ಕಾರ್ಮಿಕ, ಹೆಗ್ಗೆರೆ, ಮೀರಾಸಾಬಿಹಳ್ಳಿ, ದೇವನೂರು, ಚಿತ್ರದುರ್ಗ, ಕಳಸಾ ಮುಂತಾದ ಕಡೆ ಉಪಾಧ್ಯಾಯ ವೃತ್ತಿ. |
ಅನುಭವ |
-
ಬೆಂಗಳೂರಿನಲ್ಲಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದು.
-
1926ರಲ್ಲಿ ಗಾಂಧೀಜಿಯವರು ಮೈಸೂರು ಸಂಸ್ಥಾನದ ಅತಿಥಿಯಾಗಿ ಬಂದಾಗ ಸ್ವಯಂಸೇವಕರಾಗಿ ಕಾರ್ಯ ನಿರ್ವಹಣೆ.
-
ಆಚಾರ್ಯ ವಿನೋಬಾ ಅವರ ಜೊತೆಗೆ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ್ದು, ಶ್ರಮದಾನದ ಮೂಲಕವೇ ಮೀರಾಸಾಬಿಹಳ್ಳಿಯಲ್ಲಿ ಐದು ಕೊಠಡಿಗಳ ಶಾಲಾ ಕಟ್ಟಡ, ಆಸ್ಪತ್ರೆ, ಶಿಕ್ಷಕರ ವಸತಿ ಗೃಹಗಳನ್ನು ನಿರ್ಮಿಸಿದ್ದು.
-
ಹೆಗ್ಗೆರೆಯಲ್ಲಿ ರಂಗಮಂದಿರ, ಶಿವಾಲಯ, ಶಾಲಾ ಕಟ್ಟಡ, ಮುಖ್ಯರಸ್ತೆಯಿಂದ ಊರಿನವರೆಗೆ ರಸ್ತೆ ನಿರ್ಮಾಣ
-
ಮುಕುಂದೂರು ಸ್ವಾಮಿಗಳ ಆಶ್ರಮದಲ್ಲಿ ಪ್ರಾರ್ಥನಾ ಮಂದಿನ ನಿರ್ಮಾಣ, ಜಾನಪದ ಕಂಪ್ಯೂಟರ್ “ಸಿರಿಯಜ್ಜಿ”ಯನ್ನು ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಿದ್ದು.
-
ಶ್ರೀ ಟಿಮಡಿ ಕ್ರಿಸ್ಟೋಫರ್ ಕ.ಹಿಲ್., ಶ್ರೀ ಪೀಟರ್ ಜೆ.ಕ್ಲಾಸ್, ಶ್ರೀ ಆಂಡ್ರೂಸ್ ಮತ್ತು ತೀ.ನಂ.ಶಂಕರನಾರಾಯಣ, ಆರ್.ಶೇಷಶಾಸ್ತ್ರಿ, ಕೃಷ್ಣಮೂರ್ತಿ ಹನೂರು, ಬಸವರಾಜ ಕಲ್ಗುಡಿ ಮುಂತಾದ ಸಂಶೋಧಕರಿಗೆ ನೆರವು.
-
ಜಾನಪದ ಜಂಗಮ ಎಸ್.ಕೆ.ಕರೀಂಖಾನ್, ಸಿರಿಯಜ್ಜಿ, ಮುಂತಾದವರನ್ನು ಬೆಳಗೆರೆ ಜನತೆ ಪರವಾಗಿ ಸನ್ಮಾನಿಸಿದ್ದು.
-
ತಿರುವಣ್ಣಾಮಲೆಯ ರಮಣ ಮಹರ್ಷಿ, ಆನಂದಾಶ್ರಮದ (ಕೇರಳ) ರಾಮದಾಸರು, ಬಾಗೂರಿನ ಶರಣಮ್ಮ, ಹೃಷಿಕೇಶದ ಶಿವಾನಂದಸ್ವಾಮಿ, ಮುಕುಂದೂರು ಸ್ವಾಮಿ, ಜೆ.ಕೆ.ಗಾಂಧಿ, ಮಲ್ಲಾಡಿಹಳ್ಳಿಯ ರಾಘವೇಂದ್ರಸ್ವಾಮೀಜಿ ಅವರೊಂದಿಗಿನ ಒಡನಾಟ.
|
ಕೃತಿಗಳು |
ತುಂಬಿ (ಕವನ ಸಂಕಲನ), ಹಳ್ಳಿಚಿತ್ರ (ನಾಟಕ), ಹಳ್ಳಿಮೇಷ್ಟ್ರು (ನಾಟಕ), ಆಕಸ್ಮಿಕ (ಅಪ್ರಕಟಿತ ನಾಟಕ), ಪಾಶುಪತಾಸ್ತ್ರ (ಅಪ್ರಕಟಿತ ನಾಟಕ), ಏಕಲವ್ಯ (ಅಪ್ರಕಟಿತ ನಾಟಕ), ಸೊಹ್ರಾಬ್-ರುಸ್ತುಂ (ಅಪ್ರಕಟಿತ ನಾಟಕ), ತೆನಾಲಿರಾಮ (ಅಪ್ರಕಟಿತ ನಾಟಕ), ವಿಚಿತ್ರ ಸಾಮ್ರಾಜ್ಯಂ (ಅಪ್ರಕಟಿತ ನಾಟಕ), ಅಲ್ಲಾವುದ್ದೀನ್ (ಅಪ್ರಕಟಿತ ನಾಟಕ), ಹಿಂಗೂ ಮಾಡ್ ನೋಡ್ರಿ (ಅಕ್ರಪಟಿತ ನಾಟಕ), ಯೇಗ್ದಾಗೆಲ್ಲಾ ಐತೆ (ಶ್ರೀ ಮುಕುಂದೂರು ಸ್ವಾಮಿಗಳನ್ನು ಕುರಿತ ನೆನಪು), ಅಂತರ್ ಧ್ವನಿ (ಅನುವಾದ, ಮೂಲ: ಇನ್ನರ್ ವಾಯ್ಸ್ –ಲೇ||ಡಬ್ಲು.ಸಿ.ಸ್ಯಾಂಡರ್ಸ್) |
ಸಾಹಿತಿಗಳ ಸ್ಮೃತಿ |
ಬೇಂದ್ರೆ, ವಿ.ಸೀ., ರಾಜರತ್ನಂ, ಡಿ.ವಿ.ಜಿ., ದೇವುಡು ಅವರೊಂದಿಗಿನ ನೆನಪು |
ಮರೆಯಲಾದೀತೆ |
ಗ್ರಾಮೀಣ ಪ್ರತಿಭೆಗಳು, ಸಮಾಜಸೇವಾ ಬಂಧುಗಳು, ಆಧ್ಯಾತ್ಮಿಕ ಸಾಧಕರು, ಸಾಹಿತಿಗಳೊಂದಿಗಿನ ಒಡನಾಟದ ನೆನಪುಗಳು |
| ಅವರ ಕುರಿತು... |
ಸಾಹಿತ್ಯಕ ವಾತಾವರಣದ ಕುಟುಂಬದಲ್ಲಿ ಉದಯಿಸಿ ನಮ್ಮೊಂದಿಗೆ ಇರುವ ಅನುಕರಣೀಯ ವ್ಯಕ್ತಿ. |
(ಆಧಾರ: “ಯೇಗ್ದಾಗೆಲ್ಲಾ ಐತೆ”– ಬೆಳಗೆರೆ ಕೃಷ್ಣಶಾಸ್ತ್ರಿ) |