|
|
|||||||||||
![]() |
ಜಾನಪದ |
![]() |
|||||||||
|
|||||||||||
ಚನ್ನಮ್ಮನಾಗತಿಹಳ್ಳಿಗೆ ಕೇವಲ 1 ಕಿ.ಮೀ. (ಚಳ್ಳಕೆರೆಯಿಂದ ಸುಮಾರು 20 ಕಿ.ಮೀ.) ದೂರದಲ್ಲಿದೆ. ವ್ಯಾಸರಾಯರು ಪ್ರತಿಷ್ಟಾಪಿಸಿದ್ದಾರೆ ಎಂದು ಹೇಳುವ ಆಳೆತ್ತರದ ಆಂಜನೇಯನ ವಿಗ್ರಹವಿದೆ. ಕಾರ್ತಿಕ ಮಾಸದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಉಟ್ಲುಮರ ಎಂಬ ರೋಮಾಂಚನಕಾರಿ ಕ್ರೀಡೆಯೂ ನಡೆಯುತ್ತದೆ. ವೃತ್ತಾಕಾರದ ಕೆಸರಪಾತಿಯಲ್ಲಿ ಸುಮಾರು 20 ಅಡಿ ಎತ್ತರದ ಕಂಬ ನಿಲ್ಲಿಸಿ, ಅದಕ್ಕೆ ಲೋಳೆಸರ, ಕೆಸರು ಬಳಿದು ಜಾರುವಂತೆ ಮಾಡಿರುತ್ತಾರೆ. ಜಾರುವ ಕಂಬವನ್ನು ಹತ್ತುವ, ಇನ್ನೇನು ಕಂಬದ ತುದಿ ಮುಟ್ಟಿಬಿಟ್ಟೇವು ಎನ್ನುವ ಹಂತದಲ್ಲಿ ಅಲ್ಲಿಂದ ಜರ್ರನೇ ಜಾರಿ ಬೀಳುವ ಕ್ರೀಡೆ ರೋಮಾಂಚನಕಾರಿಯಾಗಿದೆ. ಚಿಲುಮೆಸ್ವಾಮಿ: ಮತ್ಸಮುದ್ರ ಗ್ರಾಮದಿಂದ ಕೇವಲು 3 ಕಿ.ಮೀ. ದೂರದಲ್ಲಿರುವ (ಚಳ್ಳಕೆರೆಯಿಂದ ಸುಮಾರು 20 ಕಿ.ಮೀ) ಜಾಜೂರು ಸಮೀಪವಿರುವ ಹರವಿಗೊಂಡನಹಳ್ಳಿಗೆ ಹೋಗುವ ದಾರಿಯಲ್ಲಿದೆ. ಇಲ್ಲಿ ಚಿಲುಮೆಸ್ವಾಮಿಯವರ ಗದ್ದುಗೆ ಇದೆ. ಇದನ್ನು ಸಮಾಧಿ ಎಂದೂ ಹೇಳುತ್ತಾರೆ. ಪಕ್ಕದಲ್ಲೇ ವೇದಾವತಿ ನದಿ ಹರಿಯುತ್ತದೆ. ಒಮ್ಮೆ ಚಿಲುಮೆ ತೋಡುತ್ತಿದ್ದಾಗ ಇವರು ಸಿಕ್ಕಿದ್ದರಿಂದ “ಚಿಲುಮೆಸ್ವಾಮಿ” ಎಂಬ ಹೆಸರು ಬಂತು ಎಂಬ ದಂತಕಥೆ ಇದೆ. (ಆಧಾರ: “ಮ್ಯಾಸಮಂಡಲ”- ಡಾ||ಮೀರಾಸಾಬಿಹಳ್ಳಿ ಶಿವಣ್ಣ) |
|||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||