|
|
|||||||||||
![]() |
ಜಾನಪದ |
![]() |
|||||||||
|
|||||||||||
ವೀರಭದ್ರಸ್ವಾಮಿ ಗುಡಿಯನ್ನು ಕಟ್ಟಿಸಿದವರು ಒಬ್ಬ ಮುಸ್ಲಿಂ ಜನಾಂಗದವರು! ಕ್ರಿ.ಶ. 1882ರಲ್ಲಿ ತಾಲ್ಲೂಕು ಕೇಂದ್ರವು ದೊಡ್ಡೇರಿಯಿಂದ ಚಳ್ಳಕೆರೆಗೆ ವರ್ಗಾವಣೆಗೊಂಡಿತು. ಆಗ ತಹಶೀಲ್ದಾರ್ ರವರ ಮನೆ ಈಗಿನ ವೀರಭದ್ರಸ್ವಾಮಿ ಗುಡಿಯ ಬಳಿಯೇ ಇತ್ತು. ದೇವಸ್ಥಾನದಲ್ಲಿ ರಾತ್ರಿ ಬಡೆಯುತ್ತಿದ್ದ ಕರಡಿ ವಾದ್ಯದ ಸದ್ದಿನಿಂದ ಬೇಸತ್ತ ಮುಸ್ಲಿಂ ಅಮಲ್ದಾರ್, ಚಪ್ಪಲಿಗಾಲಿನಲ್ಲಿಯೇ ದೇವಸ್ಥಾನ ಹೊಕ್ಕನು. ಆ ಕರಡಿ ವಾದ್ಯವನ್ನು ಬಡಿಯಕೂಡದೆಂದು ತಾಕೀತು ಮಾಡಿದನು. ಮರುದಿನವೇ ಇವನಿಗೆ ವಾಂತಿ ಬೇಧಿ ಶುರುವಾಗಿ ಹೆದರಿ, ಗುಡಿಸಲು ಗುಡಿಯನ್ನು ತೆಗೆಸಿ, ದೇವಸ್ಥಾನ ಕಟ್ಟಿಸುವ ಹರಕೆ ಮಾಡಿಕೊಂಡ. ಹೀಗಾಗಿ ದೇವಸ್ಥಾನದ ನಿರ್ಮಾಣ ಮಾಡಿಸಿದನು. ಪ್ರತಿ ವರ್ಷ ವೈಶಾಖ ಶುದ್ದದಲ್ಲಿ ಭಾರಿ ದನಗಳ ಜಾತ್ರೆ ನಡೆಯುತ್ತದೆ. (ಆಧಾರ: “ಮ್ಯಾಸಮಂಡಲ” – ಡಾ||ಮೀರಾಸಾಬಿಹಳ್ಳಿ ಶಿವಣ್ಣ) |
|||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||